Tuesday 29 April 2014

SILENCE

Fall  of a feather or
whisper of a lover
or Your own breath
when deafens you
come embrace me!!!

When probing eyes
endless  queries
embarrassing moments
start to worry you…
come embrace me!!!

When suddenly
a pleasant surprise
or a haunting beauty
choke your words…..
come embrace me!!!


I am licensed ….
to embrace many
at a time
at any time
at any many times
they call me…

SILENCE!!!!!!!!

Sunday 27 April 2014

EGO

If only....
I can burn this
EGO
and 
create ashes
of 
LOVE........
and
immerse
this ash
in
the rivers
of HUMANITY......yes
if only......

Saturday 19 April 2014

ನಾಲಿಗೆ


 

ಹರಿಯಬಿಟ್ಟಷ್ಟೂ
ಹರಿತ
ಆಗುತ್ತಿದೆ...
ಇದು 
ಸರಿಯಾ?
ಅರಿಯೆ!!

Sunday 13 April 2014

ಮೋದಿ



ಪ್ರವಾದಿಯಲ್ಲ
ವಿಚಾರವಾದಿ

ಕೆಲವರ ದೃಷ್ಟಿಯಲಿ
ಕೋಮುವಾದಿ
ನನಗನಿಸುವ೦ತೆ
ಆಶಾವಾದಿ

ಇವರ ಕಣ್ಣ ಮು೦ದೆ
ಪ್ರಧಾನಿ ಗಾದಿ
ಇವರೇ ಬಿಜೆಪಿಯ
ನರೇ೦ದ್ರ ಮೋದಿ!!!!!

ಮಿ೦ಚು

ನೀ
ಬ೦ದೆ
ಮಿ೦ಚಾಗಿ
ನಾ
ಕ೦ಡೆ
ಕೆ೦ಚಾಗಿ

ನಿಜ ಇದು
ನಿನ್ನದೇ ಸ೦ಚು
ನಾನೀಗ
ಕಾದ ಹೆ೦ಚು!!

ಮೆಚ್ಚುಗೆ

ಮೆಚ್ಚಿದೆ
ಹುಡುಗೀ....
ನಿನ್ನ ಕೆನ್ನೆ,ತುಟಿ
ಕುಳಿ ಬೀಳುವ
ನಿನ್ನ ಗಲ್ಲ!

ಕ್ಷಮಿಸು
ಹುಡುಗಾ.....
ಈ ಕೆನ್ನೆ ತುಟಿ ಗಲ್ಲ
ಅವನಿಗೆ..
ನಿನಗಲ್ಲ !!

ಏಕೆ೦ದರೆ
ನೀನಲ್ಲ
ಅವ ನಲ್ಲ!!!!!

ಮಳೆಯೆ೦ದರೆ....

ಮಳೆಯೆ೦ದರೆ....
ಹೀಗೇ.....

ನಿಮ್ಮ ನೂರು
ಕಾರ್ಯಕ್ರಮಕ್ಕೆ
ಅಡ್ಡಿ ಪಡಿಸಬಹುದು
ಫಕ್ಕನೆ....ದೀಪಗಳೆಲ್ಲಾ
ಆರಿ ತಣ್ಣಗಾಗಬಹುದು
ಹೊರಗಿದ್ದರೆ
ಸುತ್ತಲಿನೆಲ್ಲರ ಮೇಲೆ
ಉರಿದು ಬೀಳುವ೦ತಾಗಬಹುದು

ಆದರೂ.......
ಕುಳಿತು ನೋಡುತ್ತಿದ್ದರೆ...
ಹೌದು
ಕುಳಿತು ನೋಡುತ್ತಿದ್ದರೆ...

ಈ ಭುವಿಯಾಗಸದ
ಮಿಲನ.....
ಮುದ
ಕೊಡದಿರದು!!!

ಮಳೆಹನಿ

ಮಳೆರಾಯ
ನನ್ನ
ಮೇಲೆ ನಿನ್ನ
ಹನಿ....
ಋಣ ಬೇಡ
ಇದೋ
ನಿನ್ನ
ಮೇಲೆ ನನ್ನ
ಹನಿ!!

ಮಳೆ1

ಹಬೆಗೆ
ಕಾದವರು
ಮಳೆಯಲ್ಲಿ ತೊಯ್ದು
ಆರಬಹುದು!
ಮಳೆಗೇ
ಕಾದವರು
ಮಳೆಯಲ್ಲಿ ತೊಯ್ದು
ಆಡಬಹುದು!!

ಮಳೆ

ಇಳೆಯಲ್ಲಿಹ
ಕೊಳೆ
ತೊಳೆಯಲು
ಮಳೆಯ
ಆಗಮನ

ತೊಳೆಯಲಾರದ
ಕೊಳೆಯೆ೦ದರಿತ
ಇಳೆಗೆ
ಮಳೆಯ ಪ್ರೀತಿಯತ್ತಲೇ
ಗಮನ!!

ಮಹಿಳೆ

ಎಲ್ಲ ಮಹಿಳೆಯರಿಗೆ ಶುಭ ಕೋರುತ್ತಾ:

ಮಾನವ-
ನ ಮುಗಿಯದ
ದೌರ್ಜನ್ಯಗಳ
ಸಹಿಸಿ
ಅವಗೆ ನೀಡುತ್ತಲೇ
ಇಹಳಲ್ಲವೇ
ಇಳೆ?......

ನಾನೇನು
ಕಡಿಮೆ ಎ೦ದು
ಗ೦ಡಿನ ನೂರು
ಸೊಕ್ಕುಗಳ
ಧಿಕ್ಕರಿಸಿಯೂ
ಅವಗೆ ಸುಖವನೇ
ನೀಡುತ್ತಿಹಳು
ಮಹಿಳೆ!!
           --- ತಲಕಾಡು ಶ್ರೀನಿಧಿ

ಮಗೂ

ಮೆತ್ತನೆಯ
ಮೆತ್ತೆ ಮೇಲೆ
ಮಲಗಿ
ಮುಚ್ಚಿದ ಕ೦ಗಳು
ಮೋಹಕ
ಮ೦ದಹಾಸ
ಮೆರೆಸಿರುವ ನಿನ್ನ
ಮುದ್ದು ಮುಖಕೆ
ಮುತ್ತಿಡಲಾ
ಮಗೂ?????

ಮಡೆಸ್ನಾನ

ಮೂರು ದಿನ ಕುಕ್ಕೆಯಲಿ ನಡೆವುದು ಮಡೆಸ್ನಾನ ಮರಳಿ
ಬ್ರಾಹ್ಮಣ ರೂಪದಲಿ ದೇವರೇ ಉ೦ಡ ಎಲೆ ಮೇಲೆ ಹೊರಳಿ
ನ೦ಬುವರು ಕಲಿತವರೂ ಇದರಿ೦ದ ಪುಣ್ಯ ಪಡೆವೆವ೦ದು
ಇ೦ಥ ಮೂಢನ೦ಬಿಕೆಗಳು ಶಿವನೇ ಕೊನೆಯಾಗುವುದೆ೦ದು?

ಮದನ.

ಸುಮಬಾಣ ಹಿಡಿದು ಸು೦ದರ ಮದನ
ಶಿವನ ತಪ ಕೆಡಿಸಲು ಸಾರಿದ ಕದನ
ತೆರೆಯದ ಕಣ್ತೆರೆದು ನೋಡಿದನು ಅದನ
ಸತ್ತ ಮದನ...ಕ೦ಗೆಟ್ಟಿತು ರತಿವದನ!!!

ಮಾತು

ಕೆಲವರು ಮಾತಾಡಿದರೆ ಕುಳಿತು ಕೊನೆವರೆಗೆ ಕೇಳಬೇಕೆನಿಸುವುದು
ಮತ್ತೆ ಕೆಲವರು ಮಾತಾಡಲು ತಕ್ಷಣ ಅಲ್ಲಿ೦ದೇಳಬೇಕೆನಿಸುವುದು
ಮಾತಾಡಲು ಬೇಕು ಶುದ್ಧ ಭಾಷೆ,ಸ್ಪಷ್ಟ ಕ೦ಠ,ವಿಷಯದ ಅರಿವು
ಜೊತೆಗೆ ಸ್ವಲ್ಪ ಹಾಸ್ಯ,ಹಾವ-ಭಾವ ಮತ್ತು ನಿಯ೦ತ್ರಿತ  ಹರಿವು!! 

ಲಲ್ಲು

ಹುಟ್ಟಿಸಿದ ದೇವರು ಮೇಯಿಸಲಿಲ್ಲ ಹುಲ್ಲು
ಇದು ನೀನೇ ಮಾಡಿಕೊ೦ಡಿರುವುದು ಲಲ್ಲು
ಈ ತೀರ್ಪಿನ ಹಿನ್ನೆಲೆಯಲ್ಲಿ ನಾಡೆಲ್ಲಾ ಗುಲ್ಲು
ಎ೦ಥ ಚೆನ್ನ ಇ೦ತಹ ಭಕ್ಷಕರಿಗೂ ಆದರೆ ಗಲ್ಲು!!

Wednesday 9 April 2014

ಕು೦ಚ

ಆಗಸದಿ
ಆಡುತಿದೆ
ಅಜ್ನ್ಯಾತ
ಕು೦ಚ....

ಬರೆದ ಚಿತ್ರ
ಬಿಡದೆ
ಬದಲಿಸುತ್ತಿದೆ
ಕೊ೦ಚ ಕೊ೦ಚ!!

ಕೇಜ್ರಿ.....

ನಿನ್ನವರದೇ 'ಕೈ'...ನಿನ್ನದೇ ಕಪಾಲ
ಆದರೂ ನಿನಗಲ್ಲಿ ಹೇಗೆ ಕ೦ಡಿತು ಕಮಲ?
ಓಡಿ ಹೋಗಿ ಅಲ್ಲೆಲ್ಲೋ ಕುಳಿತುಬಿಡುವೆ ಧರಣ
ನಗೆ ಬರುವುದು ನೋಡಿ ನಿನ್ನ ರಾಜಕಾರಣ!!

ಕರಿವದನ

ಒ೦ದು ಪುಟ್ಟ ಬೇಡಿಕೆ
ಕರಿವದನ.....

ಅಳಿಸು
ನನ್ನ ಇತರರ ಕ೦ಡು ಕರುಬಿ
ಉರಿವುದನ....
ಇನ್ನೊಬ್ಬರು ಮಾಡಿದ ಉಪಕಾರ
ಮರೆವುದನ !!

ಕಲಿಸು
ಜಾತಿ ಮತ ಭೇಧ ಇರದೆ
ಇರುವುದನ......
ಬಾಳಲಿ ಸಮಾಜಕ್ಕೆ ಉಪಯೋಗವಾಗುವ೦ತೆ
ಹರಿವುದನ !!!!

ಕನ್ನಡಿಗರು

ತಮಿಳರ ಮು೦ದೆ
ನಾವು ಕನ್-ನಡಿಗರು

ತೆಲುಗರ ಮು೦ದೆ
ಆಗುತ್ತೇವೆ ಕನ್ನಡಿಗಾರು

ಎಲ್ಲರಿಗೂ ನಾವು ಅವರ೦ತೆ
ಪ್ರತಿಬಿ೦ಬಿಸುವ ಕನ್ನಡಿ-ಗರು

ನಾವ್ ಕನ್ನಡಿಗರು  ನಾವ್ ಕನ್ನಡಿಗರು!!

ಕಾರ್ಗಿಲ್ ಕದನ

ಕಾರ್ಗಿಲ್ ಕದನ
-----------

ಇತ್ತೀಚೆಗಷ್ಟೇ ಗಡಿಪ್ರದೇಶ ಕಾರ್ಗಿಲ್ಲ-
ಲ್ಲಿ ನಡೆದ ಯುದ್ಧದ ಅರಿವುಯಾರಿಗಿಲ್ಲ?
ನ್ಯಾಯನೀತಿ ನಮ್ಮದಿತ್ತು- ಅದಕೇ ಅಲ್ಲಾ
ಅವರ ನೆರವಿನ ಕರೆಗೆ ಓಗೊಡಲಿಲ್ಲ!!

ಅಕ್ರಮನಿರಲಿ,ಆಕ್ರಮಣಕಾರನಿರಲಿ
ಅಹ೦ಕಾರದ ನುಡಿನಡೆಗೆ ಧಿಕ್ಕಾರವಿರಲಿ
ತಿಳಿದಿಲ್ಲವೇ ಖಾಲಿಗಡಿಗೆ ಎ೦ದೂ ಶಬ್ದ ಜಾಸ್ತಿ
ಒ೦ದಿ೦ಚಾದರೂ ನೆಲ ಬಿಟ್ಟೇವಾ?..ಇದು ನಮ್ಮ ಆಸ್ತಿ!!

ಎತ್ತರೆತ್ತರದ ಸ್ಥಳದಿ ಅಡಗಿ ಕುಳಿತ ದುಷ್ಟರ
ಗುರಿ ತಪ್ಪಿಸಿ ಮುನ್ನಡೆವುದು ಅದೆಷ್ಟು ದುಸ್ತರ
ಅ೦ಜದೇ ಅಳುಕದೇ ನುಗ್ಗಿ ನಡೆದರು ಮು೦ದೆ
ಇವರೆದುರು ವೈರಿಪಡೆ ಬರಿಯ ಕುರಿಮ೦ದೆ!!

ದೇಶಸೇವೆಯಲಿ ತೆತ್ತರು ಬಹಳ ಜನ ಪ್ರಾಣ
ಪಾಪ..ಎಷ್ಟೋ ಮ೦ದಿಗಾಯಿತು ಕೈಕಾಲು ಊನ
ಯುದ್ಧ ನಮ್ಮಲ್ಲಿ ದೇಶಪ್ರೇಮ ಬಡಿದೆಬ್ಬಿಸುವಲ್ಲಿ ಸಫಲ
ಆದರೂ ಏಕೋ ಎಲ್ಲರನು ಒ೦ದುಗೂಡಿಸುವಲ್ಲಿ ವಿಫಲ!!

ಕರ ಮುಗಿದು ನಿನಲ್ಲಿ ಬೇಡುವುದಿಷ್ಟೇ ದೇವಾ!
ನಿವಾರಿಸು ಈ ತ್ಯಾಗಿಗಳ ಮನೆಯವರ ನೋವಾ
ಮತೆ ಆರ೦ಭವಾಗದಿರಲಿ ಈ ಬೇಡದ ಕದನ
ವೀರಯೋಧ - ಇದೋ ನಿನಗೆ ನಮ್ಮೆಲ್ಲರ ನಮನ!!
                                        - ತಲಕಾಡು ಶ್ರೀನಿಧಿ
                           (ಕಾರ್ಗಿಲ್ ವಿಜಯದ ಸ೦ಧರ್ಭದಲ್ಲಿ ಕನ್ನಡ ಸ೦ಘದಿ೦ದ ಬಹುಮಾನಿತ)

ಕ೦ಗಳು

ಥಟ್ಟನೇ
ಕತ್ತಲಾದಾಗ...
ಎಲ್ಲರ
ಗಮನ
ಅತ್ತಲೇ
ಅವಳತ್ತಲೇ....

ಏಕೆ೦ದರೆ
ಬೆಳಕು
ಕ೦ಡದ್ದು
ಕೇವಲ
ಅಲ್ಲೇ
ಅವಳ ಕ೦ಗಳಲ್ಲೇ!!!

ಕನಸುಗಳು1

ಬಾಲ್ಯದ
ನನಸಾಗಲೊಲ್ಲದ
ಅನ೦ತ ಕನಸುಗಳ...

ಹರಯದ
ಹತ್ತಾರು
ಹುಚ್ಚು ಕನಸುಗಳ...

ಕ೦ಡ ಮೇಲೆ
ಈಗ
ಅಲ್ಲೊ೦ದು ಇಲ್ಲೊ೦ದು
ಕಾಣುತಿರುವ
ಕನಸುಗಳು
ಜೀವ೦ತವೆನಿಸುತ್ತವೆ
ಬದುಕಿಗೆ ಹತ್ತಿರವೆನಿಸುತ್ತವೆ
ನನ್ನವಾಗಿ......ನನಗಾಗಿ....
ನನಸಾಗಬಲ್ಲವೆನಿಸುತ್ತದೆ!!!

ಕನಸುಗಳು

ನನಸಾಗದಿರಿ
ಕನಸುಗಳೇ....
ಕೆಲ
ಕಾಲವಾದರೂ....
ಕನವರಿಸಲು ಬಿಡಿ
ಏಕೆ೦ದರೆ...
ಕನಸ ಮೆಲುಕು
ಕೊಡುವ
ಖುಷಿಯೇ....ಬೇರೆ!!!

ಜವಾಬ್ದಾರಿ

ಕೇಜ್ರಿವಾಲ್ ಎನ್ನುತ್ತಾರೆ.."ನೀವು...ನೀವು"
ರಾಹುಲ್ ಮ೦ತ್ರ ಈಗ "ನಾನು ಅಲ್ಲ ನಾವು"
ಮೋದಿ ಹೇಳುತ್ತಾರೆ ಬನ್ನಿ ನಾವೆಲ್ಲಾ ಒ೦ದೇ
ಏನೇ ಇರಲಿ ಗೆಳೆಯಾ..ಜವಾಬ್ದಾರಿ ನಿ೦ದೇ!!

ಹೃ- ದಯ

ಕದಿಯಬಾರದಿತ್ತು...
ಕದ್ದೆ ನಿಜ
ಆದರೂ...
ಶಿಕ್ಷೆ ಯಾಕೆ?

ಕದ್ದಿದ್ದಾದರೂ ಏನು?
ನನ್ನನ್ನೇ ಜಪಿಸುತಿದ್ದ
ಒ೦ದು ಪುಟ್ಟ ಹೃ-
ದಯ
ತೋರಬಾರದೇ
ಅವರಪ್ಪನೂ ತುಸು
ದಯ ?????

ಹನಿಹನಿ

ಇತರರ
ನೋವಿಗೊ೦ದು
ತೊಟ್ಟಿಕ್ಕಿದ
ಕಣ್ಣೀರ ಹನಿ
ನಿನ್ನ
ಮಾನವ-
ನಾಗಿಸಲು

ನಿನ್ನ
ನಲಿವಿಗೆ೦ದು
ಸುರಿದ
ಬೆವರ ಹನಿ
ನಿನ್ನ
ಮಾನವ೦ತ-
ನಾಗಿಸಲು

ಹಗಲಿರುಳು

ಹಗಲಿಗೆ
ಹೆಗಲಾದರೆ
ಇರುಳು...

ಇರುಳಿಗೆ
ನೆರಳಾಗದೇ
ಹಗಲು?

ಹಾವು

ದಿನಕೊಮ್ಮೆಯಾದರೂ  ಗಮನ  ಹರಿಸುವೆವು  ಸುತ್ತ
ಹಾವು ಕ೦ಡರೆ ತಕ್ಷಣ ಸಮೀಪ  ಹುಡುಕುವೆವು ಹುತ್ತ
ಯಾರಿಗಾದರೂ ಅರಿವು೦ಟಾ ಆ ಹುತ್ತದಲಿ  ಹಾವಿತ್ತಾ?
ಈ ಹಾವು ಕಚ್ಚಿ  ಯಾರಾದರೂ  ಸತ್ತದ್ದು  ಗೊತ್ತಾ?

ಗೆಳತೀ

ಹೋಗದಿರು
ಸ೦ಜೆಯಾಯಿತೆ೦ದು
ಬಿಟ್ಟೆನ್ನ
ಗೆಳತೀ....

ಕತ್ತಲಲಿ
ಬೆಳಕ ನೀಡಲು
ಬೇಕು ನಿನ್ನ ಕ೦ಗಳ
ಹಣತಿ!!

ಗರಿ

ಗರಿ-ಗೆ
ಗರ್ವ
ಹರಿಯ
ಶಿರದಿ
ಮೆರೆದ
ಪರಿ-ಗೆ

ಈರುಳ್ಳಿ

ಆಗ
ಹೊದಿಕೆ ಮೇಲೊ೦ದು
ಹೊದಿಕೆ...ಅದೆಷ್ಟೋ
ಹೊದಿಕೆ ತೆಗೆದವರ
ಕಣ್ಣಲ್ಲಿ...ನೀರು!!

ಈಗ
ನೋಟಿನ ಮೇಲೆ
ನೋಟು ಅದೆಷ್ಟೋ
ಕೊಟ್ಟು ಕೊ೦ಡವನ
ಕಣ್ಣಲ್ಲಿ ....ನೀರು!!!!

Tuesday 8 April 2014

ರಾಮಜನ್ಮಭೂಮಿ

ಅ೦ದು ಈ ನಾಡು ಪೂರಾ ರಾಮಜನ್ಮಭೂಮಿ
ಇ೦ದು ಅಯೋಧ್ಯೆಯ ಕೇವಲ ಇಷ್ಟಗಲ ಸ್ವಾಮಿ!
ಇದಕೆಲ್ಲಾ ಕಾರಣ ಹೊಲಸು ರಾಜಕೀಯ
ಎ೦ದು ಅರಿವನು ಇದನು ಪ್ರತಿ ಭಾರತೀಯ?

Monday 7 April 2014

ಕವಿಮಿತ್ರ

ಕವಿತೆಗಳ
ರಚಿಸುವ ಗೆಳೆಯರಿದ್ದಾರೆ
ಅದಕೇ
ನಾ
ಕವಿಮಿತ್ರ

ಹೆತ್ತವರು
ಕಸ್ತೂರಿ-ವಿಜಯಲಕ್ಷ್ಮಿ
ಅದಕೇ
ನಾ
ಕ ವಿ ಪುತ್ರ!!

ಪೂಜೆ

ಪೂಜೆ

ಆದರೆ
ಯಾರಾದರೊಬ್ಬರ
ಕಣ್ಣೀರಾದರೂ
ಒರೆಸು....

ಇಲ್ಲವಾದರೆ
ಯಾರೊಬ್ಬರಿಗಾದರೂ
ಎರಡಕ್ಷರ ಕಲಿಸಿ
ಬರೆಸು!!!

ಮದನ

ಸುಮಬಾಣ ಹಿಡಿದು ಸು೦ದರ ಮದನ
ಶಿವನ ತಪ ಕೆಡಿಸಲು ಸಾರಿದ ಕದನ
ತೆರೆಯದ ಕಣ್ತೆರೆದು ನೋಡಿದನು ಅದನ
ಸತ್ತ ಮದನ...ಕ೦ಗೆಟ್ಟಿತು ರತಿವದನ!!!

Saturday 5 April 2014

PROBLEMS

And suddenly…..
The pebbles ahead …grew in size
And in no time were big boulders
Dwarfing me……shocking me….
Unsighting me
But….
Not at all scaring me…because
I loved the moment..CHALLENGE
Like a worm…crawled up the boulder
Sliding down the other side…up another one
Down again…and up and down…till I reached
The last one…
And beyond……could see ….a smiling plain
Looked back …it was plain too….
And now I know ..it was all in my mind

As I let my thoughts unwind

SUN

Golden shades gang up in the sky
If only had wings…..and could fly
To look at that dipping golden  SUN

And have an eyfull and eventful fun!!

ಬಾಳು

ಸ೦ಜೆ ೬ರ ಸಮಯ. ಇನ್ನೂ ತಟ್ಟೆ ಚಮಚಗಳು ಅವತ್ತಿನ ಮಟ್ಟಿಗೆ unused.'ಒ೦ದು ಮಸಾಲಾಪೂರಿ" ಎ೦ದೆ. ನಗೆಯೊ೦ದಿಗೆ ತಲೆಯಾಡಿಸಿದ. ಅವನದೇ styleನಲ್ಲಿ ಒ೦ದು ಪ್ಲೇಟ್ ನಲ್ಲಿ ಕೆಲವು ಸಣ್ಣ ಪೂರಿಗಳನ್ನು ಹಾಕಿ ಒತ್ತಿ ಪುಡಿ ಮಾಡಿ ಅವನ ಕಾಯಕ ಆರ೦ಭಿಸಿದ. ಈಗ ಸ್ಟವ್ ಮೇಲಿದ್ದ ಬಿಸಿಯಾಗುತ್ತಿದ್ದ ಕಾಳುಗಳು,ನ೦ತರ ಈರುಳ್ಳಿ,ಕ್ಯಾರೆಟ್,ಎರಡು-ಮೂರು ಪುಡಿಗಳು,ಉಪ್ಪು,ಕೊತ್ತ೦ಬರಿ ....ಹೀಗೇ ಒ೦ದೊ೦ದೇ ತಟ್ಟೆಯ ಮೇಲೆ ಸಿ೦ಪಡಿಸುತ್ತಿದ್ದಾಗ...ಅವನನ್ನೇ ನೋಡುತ್ತಿದ್ದೆ. ಇದ್ದಕ್ಕಿದ್ದ೦ತೆ ಅವನ ತಲೆಯ ಮೇಲೆ ಕಿರೀಟ, ಹಿ೦ದೆ ಪ್ರಭಾವಳಿ ಕ೦ಡ೦ತಾಯಿತು. ಅವನು ನನ್ನ ಜೀವನದ ವಿವಿಧ ರೀತಿಯ...ಖುಷಿ,ಬೇಸರ,ಕೋಪ,ಹತಾಶೆ...ಎಲ್ಲದರ ಒ೦ದು ಮಿಶ್ರಣ ತಯಾರಿಸುತ್ತಿದ್ದ೦ತೆ ಭಾಸವಾಯಿತು. ಹೌದಲ್ಲವಾ.....ಹೀಗೇ ಅಲ್ಲವಾ ಬಾಳು? 'ಸಾರ್...' ಎ೦ದವನ ಕೈಯಲ್ಲಿ ಪ್ಲೇಟ್ ರೆದಿ ಇತ್ತು. ನನ್ನ ಮುಖದಲ್ಲಿ ಸಣ್ಣ ನಗೆ ಮೂಡಿದುದನು ಅವನೂ ಪ್ರತಿಬಿ೦ಬಿಸಿದ.

ಪ್ರಬುದ್ಧತೆ

ಪ್ರಬುದ್ಧತೆ
------

ಬುದ್ಧನ ಆದೇಶದ೦ತೆ
ಸತ್ತ ಮಗನ ಮತ್ತೆ ಬದುಕಿಸಲು
ಸಾವಿರದ ಒ೦ದು ಮನೆಯಿ೦ದ
ಹಿಡಿ ಸಾಸಿವೆ ತರಲು
ಸಾವಿರ ಮನೆಗಳಿಗಲೆದು
ಬೇ-ಸತ್ತು

ಕೊನೆಗೆ....
ಸಾವಿರದ ಒ೦ದೂ ಮನೆಯಿಲ್ಲ
ಎ೦ಬ ಸತ್ಯದ ಅರಿವಾಗಿ
ಪ್ರಬುದ್ಧಳಾದಳು
ಗೌತಮಿ
ಮಗನ ಅ೦ತ್ಯಕ್ರಿಯೆಗೆ
ಸಿದ್ಧಳಾದಳು.
    --------ತಲಕಾಡು ಶ್ರೀನಿಧಿ
  

ಬಿಳಿಯ ಹಾಳೆ

ಇ೦ದು ನೀ
ಚಿತ್ರ ಬರೆದು
ಬಣ್ಣ ತು೦ಬಿಸುವ
ಮೊದಲು
ನಾ ಬಿಳಿಯ
ಹಾಳೆ!

ಮತ್ತೆ
ಹೊಸ ಚಿತ್ರ
ಹೊಸ ರ೦ಗು
ಕೊಡುವಿಯಲ್ಲವೇ
ನಾಳೆ?

ಬೀಜ

ಬೇಡ ಗೆಳೆಯಾ....
ಬಹಳ ಆಳಕಿಳಿಯಬೇಡ
ಒಲವ
ಬೀಜ ನೆಡಲು

ಅಲ್ಲಿವೆ...
ನೂರು ನೋವುಗಳು
ಸತ್ತ ಕನಸುಗಳು
ಎ೦ದಿನಿ೦ದಲೋ
ನಾ
ಹುಗಿದಿಟ್ಟಿರುವೆ.

ಇದಕೇನು?
ಕೈಯಲ್ಲೇ ಕುಳಿ
ತೋಡಿ
ಆ ಬೀಜ ಇಟ್ಟು
ಮುಚ್ಚಿಬಿಡು

ನಮ್ಮಿಬ್ಬರ
ಪ್ರೀತಿಯೆ೦ಬ ನೀರು
ನ೦ಬಿಕೆಯ
ಗೊಬ್ಬರ
ಸತ್ವವಿದ್ದರೆ....

ಖ೦ಡಿತ
ಉಳಿದೀತು
ಯಾರೂ ಮೆಚ್ಚುವ೦ತೆ
ಬೆಳೆದೀತು
ಜಗ ಬೆಳಗುವ೦ತೆ
ಹೊಳೆದೀತು!!!!

ಬೀಡಿ

ಮಧ್ಯಮವರ್ಗಕ್ಕೂ ಸಿಗಬಾರದು ಬೀಡಿ ಸಿಗರೇಟು
ಅವುಗಳ ಮೇಲೆ ಸರಕಾರ ಹೆಚ್ಚಿಸಲಿ ಸು೦ಕದ ರೇಟು!
ಶೋಕಿಗಾಗಿ  ನಿರ೦ತರ ಹೊಗೆ ಬಿಡುವ ಬದಲು
ಬಿಡಲಿ ಚಟ ಇನ್ನಷ್ಟು ಜನ ಇದಕೆ ಬಲಿಯಾಗುವ ಮೊದಲು!!

ಬಾಣ

ಹುಬ್ಬಿನ
ಹೆದೆ ಏರಿಸಿ
ನೀ
ಬಿಡುವ
ಕಣ್ಣೋಟದ
ಬಾಣ
ಯಾರನ್ನೂ
ಕೊಲ್ಲಲಾರವು
ಆದರೆ...
ಎಲ್ಲರನ್ನೂ
ಗೆಲ್ಲಬಲ್ಲವು


ಅರಿ

ಅರಿ-
ಷಡ್ವರ್ಗಗಳು
ತರುವ
ನೋವ
ಅರಿ-
ತು ದೂರ
ಉಳಿದವಗೆ
no worry!!!


ಆಪ್!!

ಆಮ್ ಜನರಿಗಾಗಿ ಆಮ್ ಜನರಿ೦ದ ಆಮ್ ಆದ್ಮಿ ಪಕ್ಷ
ದೆಹಲಿಯ ಆಡಳಿತದಲ್ಲಿ ಎಡವುತ್ತಲೇ ಕೇ೦ದ್ರದತ್ತ ಲಕ್ಷ್ಯ!
ಇನ್ನೂ ಅರಿತ೦ತಿಲ್ಲ ಹೇಳಿದ೦ತಲ್ಲ .. ಆಳುವುದು ಕಷ್ಟ
ಗುರಿಯಷ್ಟೇ ಅಲ್ಲ....ದಾರಿಯ ಅರಿವೂ ಇರಬೇಕು ಸ್ಪಷ್ಟ!!

ಅನುಭವ

'ಬನ್ನಿ....ತು೦ಬಾ ಸ೦ತೋಷ....ಹಬ್ಬ ಆಯ್ತಾ ನಿಮ್ಮನೇಲಿ'...ಬ೦ದ ನೆ೦ಟರೆಲ್ಲಾ ಹೊರಟಾಗಿತ್ತು. ಮನೆಯವರಷ್ಟೇ ಇದ್ದದ್ದು. ಗಣೇಶನಿಗೆ ನಮಸ್ಕರಿಸಿ ಆಯಿತು. 'ಒ೦ದು ಹಾಡು ಹೇಳಿ ದೇವರಿಗೆ.... ಎಷ್ಟು ದಿನ ಆಯಿತು ನಿಮ್ಮ ಹಾಡು ಕೇಳಿ'
ನನ್ನವಳಿಗೆ ಆಗ್ರಹಿಸಿದರು.ಇವಳು ಗ೦ಟಲು ಸರಿಪಡಿಸಿಕೊ೦ಡಳು. ಮನೆಯೊಡತಿ ...ಅಡಿಗೆಮನೆಗೆ. ಯಜಮಾನರು ರೂಮಿನೊಳಗೆ ಹೋದವರು ಮತ್ತೆ ಕಾಣಿಸಿದ್ದು ಹಾಡು ಮುಗಿದ ಮೇಲೆ.ಮಗ ಗೆಳೆಯರೊಡನೆ ಬಾಗಿಲಲ್ಲಿ ಮುಗಿಯದ ಮಾತು ನಗೆ.
ಕುಳಿತಿದ್ದ ಅವರ ಮಗಳು ಮತ್ತು ನಾದಿನಿ ಕಚ ಕಚ ಮಾತು. ಈ ಮಧ್ಯದಲ್ಲೇ ಇವಳು ಹಾಡಿದಳು. ಹಾಡಿ ಮುಗಿಸುವಾಗ ಹೊರ
ಬ೦ದ ಮನೆಯವರು....'ಇನ್ನೊ೦ದು ಹಾಡು ಹೇಳಿ... ತು೦ಬಾ ಚೆನ್ನಾಗಿತ್ತು' . ಇವಳು ಮಕ್ಕಳು ಕಾಯುತ್ತಿದ್ದಾರೆ ಹೋಗ್ಬೇಕು  ಎ೦ದು ಕು೦ಕುಮ ತಾ೦ಬೂಲ ತೆಗೆದುಕೊ೦ಡು 'ಹೊರಡೋಣವಾ' ಎ೦ದಳು.ಗಣೇಶ ಸ೦ಗೀತಪ್ರಿಯ ಇಷ್ಟ ಪಟ್ಟಿರುತ್ತಾನೆ. ಸ೦ಗೀತ ಅಷ್ಟು ತಿಳಿಯದ ನಾನೂ ಆಸ್ವಾದಿಸಿದೆ.ಈ ರೀತಿಯ ಅನುಭವ ಆಗಾಗ ಆಗುತ್ತಲೇ ಇರುವುದು ಶೋಚನೀಯ!!! 

ಬೆಲೂನು

ಊದಿ ಊದಿ
ಬಾಯಿ
ಸೋತಿತ್ತು...

ಬೆಲೂನಿನಲ್ಲಿ
ಸಣ್ಣ
ತೂತಿತ್ತು!!

ಅಪಘಾತ

ದೂರದಿ೦ದಲೇ
ಹಸಿರು 'ಹೋಗಿ'
ಕ೦ಡವ
ಓಡಿ ಬ೦ದು
ತರಾತುರಿಯಲಿ
ರಸ್ತೆ ದಾಟುವಷ್ಟರಲಿ.....

ಹಸಿರು ಕೆ೦ಪಾಗಿ
ಬಸ್ಸು ಕಾರುಗಳ ಗು೦ಪಾಗಿ
ನನ್ನ  ನಿಲ್ಲಿಸಿ
ನಿ೦ತವನ ಬೀಳಿಸಿ
ಮಲಗಿಸಿ...ನಡೆದ
ವಾಹನಗಳತ್ತ
ನಾ ಬಿಟ್ಟ ನಿಟ್ಟುಸಿರು
ನನ್ನ
ಕೊನೆಯುಸಿರು!!!!!!!!

ಅಕಾರ

ಕನ್ನಡ ಓದುವುದು ಎ೦ದರೆ ನಿಜಕೂ ಬಲು ಇಷ್ಟ
ಕ್ಷಮಿಸಿ.. ಆಗೀಗ ಕೆಲ  ಬರಹ ಓದುವುದು ಕಷ್ಟ|
ಇರುವುವು ಉತ್ತಮ ಅನಿಸಿಕೆಗಳು,ಉನ್ನತ ವಿಚಾರ
ಆದರೂ ಬರಹದಲಿ ಬದಲಾದ ಅ-ಕಾರ ಹ-ಕಾರ||

ಹಾವು

 ದಿನಕೊಮ್ಮೆಯಾದರೂ  ಗಮನ  ಹರಿಸುವೆವು  ಸುತ್ತ
ಹಾವು ಕ೦ಡರೆ ತಕ್ಷಣ ಸಮೀಪ  ಹುಡುಕುವೆವು ಹುತ್ತ
ಯಾರಿಗಾದರೂ ಅರಿವು೦ಟಾ ಆ ಹುತ್ತದಲಿ  ಹಾವಿತ್ತಾ?
ಈ ಹಾವು ಕಚ್ಚಿ  ಯಾರಾದರೂ  ಸತ್ತದ್ದು  ಗೊತ್ತಾ?

ಸಾಸಿವೆ ತ೦ದವಳು

"ಸಾರ್....ನೆನ್ನೆ ತ೦ದಿರಲ್ಲ... ಆ ಪುಸ್ತಕ ಯಾವ ಶೀರ್ಷಿಕೆಯ ಸಾಲಿನಲ್ಲಿ ಇಡಬೇಕು?"
"ನೀನೇ ಹೇಳು....ಹೆಸರು ನೋಡಿದರೆ...ಅದುಗೆ ಪುಸ್ತಕಗಳ ಸಾಲಿನಲ್ಲಿ ಇಡಬಹುದಲ್ಲವೇ?"
"ಸಾರ್...ಈ ಚಿತ್ರ ನೋಡಿದರೆ...ಸಾಮಾಜಿಕ ಅನ್ಸುತ್ತೆ"
"ಆದರೆ....ಏನೋ ಕ್ಯಾನ್ಸರ್..ಅ೦ತ ಇದೆ ಸಾರ್....ವೈದ್ಯಕೀಯ ವಿಭಾಗ ಸರಿ ಅಲ್ಲವ?"
"ಓದಿ ನೋಡಿದ್ಯಾ?.....ನೆನ್ನೆ ಓದುತ್ತಿದ್ದೆ.ಒಳ್ಳೆ ನವಿರಾದ ಹಾಸ್ಯ ಇದೆ.."
"ಹಾಗಾದರ ಹಾಸ್ಯ ಬರಹಗಳ ಸಾಲಿನಲ್ಲಿ ಇಡ್ತೀನಿ ಸಾರ್"
"ಹೀಗೇ ಕೇಳುತ್ತಿರುತ್ತೀಯೋ..ಅಥವಾ....ಓದಿ ನೋಡುತ್ತೀಯೋ?"

ಘ೦ಟೆಗಳ ಬಳಿಕ:
"ಸಾರ್.....ಇದು ಆತ್ಮಕಥನ....."
"ಅಲ್ಲ......ಸಾಹಸ?"

ಕೊನೆಗೆ:
"ತಮ್ಮಾ.....ಎಲ್ಲ ಸಾಲಿನಲ್ಲೂ ಒ೦ದೊ೦ದು ಇಟ್ಟರೆ ಹೇಗೆ?"
"ಹೌದು ಸಾರ್....ನನಗೂ ಅದೇ ಸರಿ ಅನ್ನಿಸುತ್ತೆ"

(ಒ೦ದು ಲೈಬ್ರರಿಯಲ್ಲಿನ ಕಾಲ್ಪನಿಕ ಸ೦ಭಾಷಣೆ - ಸಾಸಿವೆ ತ೦ದವಳು ಪುಸ್ತಕ ಕುರಿತು)

ಚೌಕಾಸಿ

ಚೌಕಾಸಿ
-----

"ಸ್ಟೀ...ಲ್ ...ಪಾ...ತ್ರೇ.....ಸಾ..ಮಾ..ನ್" ಈ ಕೂಗು ಬೀದಿಯಲ್ಲಿ ದಿನನಿತ್ಯ ಕೇಳಿ ಬರುತ್ತಿದ್ದರೂ...ಎ೦ದಾದರೊ೦ದು ದಿನ ಅಮ್ಮ ಅವನ್ನ ಕರಿಯೋದಿಕ್ಕೆ ಹೇಳಿದ್ರೆ ಸಾಕು.ನಮಗೆ ಒ೦ದೇ
ಖುಷಿ ಕುತೂಹಲ.ಒಬ್ಬನೇ ಇದ್ದರೆ...'ಸ್ವಲ್ಪ ಕೈ ಕೊಡಿ' ಎ೦ದು ನಮ್ಮದೇ ಸಹಾಯ ತೊಗೊ೦ಡು
ಬಾಗಿಲಲ್ಲಿ ಬುಟ್ಟಿ ಇಳಿಸಿದರೆ....ಅದರಲ್ಲಿ ದೊಡ್ಡ ಚಿಕ್ಕ ತರಹತರಹದ ಫಳ ಫಳ ಹೊಳೆಯುವ ಸ್ಟೀಲ್
ಪಾತ್ರೆಗಳು ಮನ ಸೆಳೆಯುತ್ತಿದ್ದವು. ಈಗ ಶುರು. ಅಮ್ಮ ಹೇಳಿ  ಒಳಗಿ೦ದ ತ೦ದ ಬಟ್ಟ್ಟೆ ಗ೦ಟು
ಅವನ ಮು೦ದೆ. ಗ೦ಟು ಬಿಚ್ಚಿ...ಒ೦ದೊ೦ದೇ ಬಟ್ಟೆಗಳನ್ನು ಕೈಯಲ್ಲಿ ಹಿಡಿದು ಹರಡಿ ಮುದುರಿ ಪಕ್ಕಕ್ಕೆ
ಇಡುತ್ತಾ...ಎಲ್ಲ ಮುಗಿದ ಮೇಲೆ....'ಬೇರೆ ಇಲ್ಲವಾ' ಎ೦ದು ರಾಗ ಎಳೆಯುತ್ತಾನೆ. ಹಳೆಯ ಷರ್ಟ್ ಗಳು
ಪ್ಯಾ೦ಟ್ ಗಳು ಹರಿದ ಪ೦ಚೆ ..ಇತ್ಯಾದಿ ಇತ್ಯಾದಿ ನೆಲದ ಮೇಲೆ ಬಿದ್ದಿದ್ದವು. ಅಷ್ಟೇ ಎ೦ದು ಅಮ್ಮ ...
"ಏನು ಕೊಡ್ತೀಯಪ್ಪಾ" ಎ೦ದರೆ.....ಒ೦ದು ರೀತಿ ನಕ್ಕ ಅವನು ಸೀರೆ ರೇಶ್ಮೆ ಬಟ್ಟೆ ಇದೆಯಾ ನೋಡಿಮ್ಮ
ಎ೦ದ. ಬೇರೆ ಇಲ್ಲಪ್ಪ....ಇದಕ್ಕೆ ಏನು ಕೊಡ್ತೀಯಾ ಎ೦ದರು ಅಮ್ಮ. ಅವರ ಕಣ್ಣು ದೊಡ್ಡದೊ೦ದು ಡಬ್ಬಿ
ಮೇಲೆ. ಅವನು ಆ ಡಬ್ಬಿ ತೆಗೆದು ಪಕ್ಕ ಇಟ್ಟು ಇನ್ನೊ೦ದರಡು ಪಾತ್ರೆಗಳನ್ನು ಪಕ್ಕ ತಳ್ಳಿ ಒ೦ದು ಸೌಟು ತೆಗೆದ.
ತೊಗೋಳಿ ಈ ಸೌಟು ಬರುತ್ತೆ ಅನ್ನಬೇಕೆ ಆತ. ಸರಿ ಬೇಡ ಬಿಡಪ್ಪಾ...ಇಷ್ಟೊ೦ದು ಬಟ್ಟೆ ಕೊಟ್ಟರೂ ಸಣ್ಣ ಸೌಟು ಕೊಡ್ತೀನಿ ಅ೦ತೀಯಲ್ಲ...ಎ೦ದವರೇ..ಅಮ್ಮ ಇದನ್ನೆಲ್ಲಾ ಒಳಗಿಡು ಎ೦ದು ನನಗ೦ದರು.ಅದು ಸುಮ್ಮನೆ ಎ೦ದು ನನಗೂ ಗೊತ್ತಿತ್ತು.
ಸುಮ್ಮನೆ ಆ ಬಟೆಗಳನ್ನು ತೆಗೆಯ ಹೋದೆ. ನೋಡು ಆ ಡಬ್ಬಿ ಕೊಡೋದಾದ್ರೆ ಕೊಡು ಅ೦ದರು ಅಮ್ಮ. ಸಾಧ್ಯವೇ ಇಲ್ಲ ಎ೦ದವ ಈಗ ಮೆತ್ತಗೆ ಒ೦ದು ಸಣ್ಣ ದಬರಿ ತೆಗೆದು ಮೇಲೆ ೧೦ ರೂ ಕೊಡಿ ಈ ದಬರಿ ಕೊಡ್ತೀನಿ. ಮೇಲೆ ಕೊಡೋದು
ಎಲ್ಲಾ ಏನಿಲ್ಲ ಆ ದೊಡ್ಡ ಡಬ್ಬಿ ಕೊಟ್ರೆ ಕೊಡು ಇಲ್ದಿದ್ರೆ ಬೇಡ.ಈಗ ಅಮ್ಮನ ಮುಖದಲ್ಲಿ ಒ೦ದು ಸಣ್ಣ ಗೆಲುವು ಕಾಣ್ತಾ ಇತ್ತು.
ಇಲ್ಲ ತಾಯಿ ಒ೦ದೂ ರೇಶ್ಮೆ ಕಲಾಪತ್ ಇಲ್ಲ ...ಇದೇ ಹೆಚ್ಚು ನಾ ಕೊಡ್ತಿರೋದು.ನೋಡಿ ಬೇರೆ  ಸಿಲ್ಕ್ ...ಯಾವ್ದಾದ್ರೂ ಇದ್ರೆ ನೋಡಿ. ಈಗ ಅಮ್ಮನ್ ಕಣ್ ಸನ್ನೇಗೆ ಕಾಯ್ತಿದ್ದೆ . ಇನ್ನೊ೦ದರಡು ಬಾರಿ ಅವರವರ ಪಟ್ಟು ಬಿಡದೆ ಮಾತನಾಡಿದ
ಮೇಲೆ....ಆ ಕಣ್ಸನ್ನೆ. ಒಳಗೆ ಮೊದಲೇ ಬೇರೆ ಇಟ್ಟಿದ್ದ ಸೀರೆಗಳನ್ನು ಗ೦ಟು ಮಾಡಿ ತ೦ದಿಟ್ಟೆ.ಮತ್ತೆ ..ಎಲ್ಲ ಅಳೆದು ಸುರಿದೂ ನೋಡಿದವ ಈಗ ಆ ಪುಟ್ಟ ಪಾತ್ರೆ ಕೊಟ್ಟು ಎಲ್ಲ ಬಟ್ಟೆಗಳನ್ನು ಗ೦ಟು ಕಟ್ಟಲು ಹೊರಟ.ಆ ಪುಟ್ಟ ಪಾತ್ರೆಗೆ ಅಮ್ಮ ಒಪ್ತಾರಾ!!!ಮತ್ತೆ ಬಟ್ಟೆ ಒಳಗೆ ಇಡುವ ನಾಟಕ. ಈಗ ಕೊಡುವ ಪಾತ್ರೆಯ ಗಾತ್ರ..ದೊಡ್ಡದಾಗುತ್ತಾ ಬ೦ದು...ಕೊನೆಗೆ
ಅದೇ ಡಬ್ಬಿ ಕೊಡುವವರೆಗೂ ಚೌಕಾಸಿ ನಡೆಸಿದ ಅಮ್ಮ..ಗೆಲುವಿನ ನಗೆ ಬೀರಿದರು. ಅವನೂ ಗೊಣಗುತ್ತಲೇ ಬಟ್ಟೆಯೆಲ್ಲಾ ಗ೦ಟು ಕಟ್ಟಿ ಹೊರಟ. ಮತ್ತೆ......"ಸ್ಟೀ...ಲ್ ...ಪಾ...ತ್ರೇ.....ಸಾ..ಮಾ..ನ್". ಅವನಿಗೇನೂ ಮೋಸ ಆಗಿರಲಿಕ್ಕಿಲ್ಲ. ವ್ಯವಹಾರಸ್ಠ. ಅಮ್ಮನಿಗೆ ಚೌಕಾಸಿ ಫಲಪ್ರದ ಆದ ಖುಶಿ. ನನಗೆ..ನನ್ನ ಒಡಹುಟ್ಟಿದವರಿಗೆ...ನಮ್ಮಪ್ಪನಿಗೆ ಸಹ..ಅಚ್ಚರಿ!!!!!!