Friday 29 March 2019

#bald&beautiful!



 ರವಿಯ ಹೊಂಗಿರಣ
 ಶಿರದ ಮೇಲಿನ ದ್ವೀಪದಿಂ
 ಪ್ರತಿಫಲಿಸಿ ಕನ್ನಡಿಯೊಳು
 ಹಾದು ಎದುರು ಗೋಡೆಯ
 ಮೇಲೆ ಕಾಮನಬಿಲ್ಲು ಮೂಡಿತು
 ಕಂಡ ಅವಳ ಮೊಗದಲ್ಲಿ
 ಮೂಡಿದ್ದು ಹಾಲು ಬೆಳದಿಂಗಳು!

Tuesday 19 March 2019

ಗೆಳೆಯಾ4

ಬದಲಾಗಿದ್ದೇನೆ
ಗೆಳೆಯಾ
ನಾನು ನಾನೇ ಆಗಿ
ಬೇಸತ್ತಿದ್ದೇನೆ
ಈಗ ನಿನಗೆ
ನಿನ್ನನೇ ತೋರುವ
ಕನ್ನಡಿಯಾಗಿದ್ದೇನೆ
ನೋಡುವ ಧೈರ್ಯ
ನಿನಗಿದೆಯಾ?

Friday 15 March 2019

#ಹಾಸನ



ಈಗ ಹಾಸನ ಹೆಚ್ಚು ಹೆಚ್ಚು ಮತಾಗಿರುವುದರಿಂದ ನನಗೆ ನನ್ನಜ್ಜ ಹೇಳುತ್ತಿದ್ದ ಕಥೆಯೊಂದು ನೆನಪಾಗುತ್ತಿದೆ. ನಗ್ತೀರೋ ಬೈಕೋತೀರೋ ನಿಮಗೆ ಬಿಟ್ಟದ್ದು. ಈಗ ಓದಿ:

ಬಡ ಬ್ರಾಹ್ಮಣನೊಬ್ಬ ಅರಸರಿಂದ ಏನಾದರೂ ದಾನ ಪಡೆಯುವ ಉದ್ದಿಶ್ಯದಿಂದ ರಾಜಸಭೆಗೆ ಬಂದು ಸಭಿಕವರ್ಗದಲ್ಲಿ ಕಾತರದಿಂದ ಕುಳಿತಿರುತ್ತಾನೆ. ಅರಸರು ಬಂದು ಕೆಲ ಮುಖ್ಯ ಅಹವಾಲುಗಳನ್ನು ಆಲಿಸಿ ಪರಿಹಾರಗಳನ್ನು ಘೋಷಿಸಿದ್ದಾರೆ. ಮಧ್ಯೆ ಒಂದು ಸನ್ನ ಮೌನದ ಸಮಯಕ್ಕೆ ಸರಿಯಾಗಿ ರಾಜರೇ ಜೋರಾಗಿ ಹೋಸಿಬಿಡುವುದೇ. ಎಲ್ಲರೂ ಮುಸಿಮುಸಿ ಮರೆಯಲ್ಲಿ ನಗುತ್ತಾ ಇರುವಾಗ ರಾಜರು ಒಮ್ಮೆ ಗುಡುಗಿದರು ' ಯಾರದು ಸಭೆಯಲ್ಲಿ ಹೂಸಿದ್ದು?'. ರಾಜರೆಂದು ಎಲ್ಲರಿಗೂ ಗೊತ್ತು. ಆದರೆ ಹೇಗೆ ತಾನೇ ಹೇಳಿಯಾರು. ಸದವಕಾಶ ಕಂಡ ನಮ್ಮ ಬ್ರಾಹ್ಮಣ 'ಮಹಾಸ್ವಾಮಿ ತಪ್ಪು ನನ್ನಿಂದ ನಡೆಯಿತು. ಕ್ಷಮಿಸಿ' ಎಂದ. ಮಹಾರಾಜರು ತಕ್ಶಃಅಣವೇ ಮಂತ್ರಿಗೆ ಹೇಳಿ ಆ ಬ್ರಾಹ್ಮಣನಿಗೆ ಹೊನ್ನಿನ ಚೀಲವನ್ನೂ ಬೇಕಾದಷ್ಟು ಸಾಮಾನುಸರಂಜಾಮುಗಳನ್ನೂ ಕೊಟ್ಟು ಜೊತೆಗೆ ನಗರದಾಚೆಯ ಒಂದಿಷ್ಟು ಭೂಮಿಯನ್ನೂ ಕೊಟ್ಟು ಕಳಿಸಿಕೊಟ್ಟರು.ಸಮಯದಲ್ಲಿ ರಾಜನ ಮರ್ಯಾದೆ ಕಾಯ್ದ ಆ ಬ್ರಾಹ್ಮಣನ ಅದೃಷ್ಟ ಕಂಡು ಎಲ್ಲರೂ ಅಚ್ಚರಿಯಿಂದ  ಅಭಿನಂದಿಸಿದರು. ಅವನ ನೆರೆಮನೆಯ ಬ್ರಾಹ್ಮಣನ ಹೆಂಡತಿಗೆ ಮಾತ್ರ ಎಲ್ಲಿಲ್ಲದ ಅಸೂಯೆ. ಅವಳು ತನ್ನ ಗಂಡನಿಗೆ ದುಂಬಾಲು ಬಿದ್ದಳು ಅವನೂ ಹೂಸಿ ದಾನ ಪಡೆದು ಬರಬೇಕೆಂದು ಆಗ್ರಹಿಸಿದಳು.

ಮಾರನೇ ದಿನ ಅವನು ಹೊರಡುವುದಕ್ಕೆ ಮೊದಲು ಎಲ್ಲ ರೀತಿಯ ಆಹಾರ ತಯಾರಿಯಲ್ಲಿ ಅವನನ್ನು ಸಜ್ಜುಗೊಳಿಸಿ ಕಳಿಸಿದಳು. ಆ ಬ್ರಾಹ್ಮಣ ಆರಮನೆಗೆ ಹೂಸುತ್ತಲೇ ಹೋಗುವಷ್ಟೂ ಕಡಲೆ ಇತ್ಯಾದಿಗಳು ಅವನ ಹೊಟ್ಟೆ ಸೇರಿದ್ದವು. ಸಭೆ ಅರಂಭವಾಗುತ್ತಿದ್ದಂತೆಯೇ ರಾಜ ಗುಡುಗಿದ ' ಯಾರದು ಈ ದುರ್ವಾಸನೆಗೆ ಕಾರಣಕರ್ತ?'.  ಒಡನೆಯೇ ಬ್ರಾಹ್ಮಣ ಮುಂದೆ ಬಂದು ಹಲ್ಲು ಕಿರಿಯುತ್ತ 'ನಾನು ಮಹಾಸ್ವಾಮಿ' ಎಂದ. ಈಗ ಮಂತ್ರಿಗೆ ರಾಜ ಸನ್ನೆ ಮಾಡಿದ. ಅ ಬ್ರಾಹ್ಮಣನ ಅಂಡಿಗೆ 'ಆಸನ' ಎಂದು  ಬರೆ ಹಾಕಿ ಕಳಿಸುವಂತೆ ಗುಟ್ಟಾಗಿ ಹೇಳಿದ. ಬರೆಯಿಂದ ಕಂಗಾಲಾಗಿ ಬ್ರಾಹ್ಮಣ ಕುಯ್ಯೋ ಮರ್ರೋ ಎಂದು ಮನೆ ಸೇರುತ್ತಿದ್ದಂತೆ ಅವನ ಹೆಂಡತಿ ' ಏನ್ರೀ ಏನೇನು ಕೊಟ್ಟರು?' ಎಂದು ಕಿರುಚಿದಳು ಖುಷಿಯಿಂದ. ಬ್ರಾಹ್ಮಣ 'ಅಂಡಲ್ಲಿ ಆಸನ ಬರೆದಿದೆ ಕಣೇ ರಂಡೇ' ಎಂದ ನೋವಿನಿಂದ. ಅವಳು ಇನ್ನೂ ಉತ್ಸಾಹದಿಂದ 'ಹಾಸನದ ಪಕ್ಕ ಬೇಲೂರಿತ್ತಲ್ಲ ಅದನ್ನ ಬರೀಲಿಲ್ವೇನ್ರೀ?' ಎನ್ನಬೇಕಾ!