Tuesday 25 December 2018

ಆಗಮನ

ನಸುಕಿನಲಿ
ಮೂಡಣದಿ
ನೇಸರನ
ಆಗಮನ!

ಮುದಗೊಳಿಸೆ
ಚೇತನವ
ಕುಣಿದೆದ್ದಿತು
ಆಗ ಮನ!!

Friday 14 December 2018

ಕವನ ಗೀಚೋರೆಲ್ಲರ ಪರವಾಗಿ......

ಕವನ ಗೀಚೋರೆಲ್ಲರ ಪರವಾಗಿ......

ನನ್ನ ಬರಹದ
'ನಾನು'
ನಾನೇ ಎಂಬ ಸಂಶಯ ಬೇಡ
ಹಾಗೆಯೇ ಅಲ್ಲಿನ
'ನೀನು'
ನೀನೆಂದು ಅಲ್ಲವೇ ಅಲ್ಲ
ಇಲ್ಲಿಯ
'ಅವನು/ಅವಳು'
ನಾನಲ್ಲವೆಂದು
ಪ್ರಮಾಣಿಸಲಾರೆ
ಮತ್ತು
ನೀನಲ್ಲವೆಂದೂ ನಂಬಬೇಕಿಲ್ಲ
ಕೆಲವೊಮ್ಮೆ
ಹೀಗೆ
ಮತ್ತೆ ಕೆಲವೊಮ್ಮೆ
ಹಾಗೆ
ಯಾರು ಎಂಬ ಕುತೂಹಲ
ಬಿಟ್ಟು ಯಾರೋ ಎಂಬ
ಸಮಾಧಾನ ಒಳ್ಳೆಯದು
ನಿಮಗೂ.....
ನನಗೂ!
                     - ತಲಕಾಡು ಶ್ರೀನಿಧಿ


ಇಂದ: ತಲಕಾಡು ಶ್ರೀನಿಧಿ
      731, 4ನೇ ಅಡ್ಡರಸ್ತೆ, ಬಿ ಇ ಎಂ ಎಲ್ ಬಡಾವಣೆ 3ನೇ ಹಂತ,
      ರಾಜರಾಜೇಶ್ವರಿನಗರ, ಬೆಂಗಳೂರು-560098
      ಮೊ: 97390 96785