Saturday 23 January 2021

ಬಸಿರು


ಮತ್ತೆ ನಿನ್ನ
ಎದುರುಗೊಳ್ಳಲು
ಖಾಲಿಯಾಗಿದ್ದೆ
ನಿಜ
ಆದರೆ...
ಇಷ್ಟು ತಡ ಮಾಡಿ
ಬರುವುದು ಎಂದು
ತಿಳಿಸಬೇಕಿತ್ತಲ್ಲವೇ
ನೀನೊಮ್ಮೆ?
ಖಾಲಿ ಬಿಟ್ಟರೆ
ಪಾರ್ಥೇನಿಯಮ್ ಬೆಳೆವ
ಭೀತಿ
ಮೊದಲು ಹೃದಯ
ಎಸೆದವನಲ್ಲೇ ಮೂಡಿತ್ತು
ಪ್ರೀತಿ
ತಬ್ಬಿಕೊಂಡೆ
ಬಾಚಿ ತುಂಬಿಕೊಂಡೆ
ಹುಲ್ಲುಕಡ್ಡಿಗೂ ಜಾಗ
ಬಿಡದಂತೆ.
ಈಗಿಲ್ಲಿ
ಚಿಗುರೊಡೆದಿದೆ
ಹೆಸರಾದರೂ ನಿನ್ನದಿರಲಿ
ಯಾರೂ ನಿನ್ನನ್ನ
'ಬಿಟ್ಟು ಹೋದ ಬುದ್ಧನಂತೆ'
ಎನ್ನದಿರಲಿ.