Wednesday 14 November 2018

ಅವಳೇ

ಹಗಲೆಂದರೆ
ಅವಳೇ
ಕಂಗಳಲಿ ರವಿಯ ತೇಜ
ನಗೆಯಲಿ ಹರಡಿದ ಬೆಳಗು!

ಇರುಳೆಂದರೂ
ಅವಳೇ
ಕಂಗಳಲಿ ತಾರೆಗಳು
ನಗೆಯ ಬೆಳದಿಂಗಳು!!

Monday 12 November 2018

ಅಶ್ವತ್ಥಾಮ



ಹೆಸರುಸುರಿಸಿ
ಜನಕನ ಕಂಗೆಡಿಸಿ
ಕೆಡವಿದ
ಪಾಂಡುಪುತ್ರರ
ಸೀಳ ಬಂದವನಿಗೆ
ಭ್ರಮೆಯಾಯಿತೆಂತು
ಉಳಿದರದೆಂತು ಈ ಪಂಚರು?

ಅವರ ಚಿಣ್ಣರ ವಧೆ
ಛೇ...ಹಿತವಿಲ್ಲ
ಇದೋ ನಾರಾಯಣಾಸ್ತ್ರದ
ವಂಶವಿನಾಶಿ ಮಂತ್ರದಂಡ!

ಓ....ಗೊಲ್ಲನಲ್ಲೆ
ಇರುವನಲ್ಲ....ಬಳಿಯಲ್ಲೆ
ಉತ್ತರೆಯ ಗರ್ಭವಷ್ಟೇ ಅದಕೆ
ಸಿಕ್ಕ ಬಲಿ!

ಶಾಪ ಹೊತ್ತು ಈಗ ನನಗೆ
ಬೇಕಿದೆಯೇನು
ಈ ಚಿರಂಜೀವಿ ಪಟ್ಟ?

ಕಲಿಯಾಗಿದ್ದೆ ನಿಜ
ಆದರೆ
ಕಲಿಯಲೇ ಇಲ್ಲ!