Monday 12 November 2018

ಅಶ್ವತ್ಥಾಮ



ಹೆಸರುಸುರಿಸಿ
ಜನಕನ ಕಂಗೆಡಿಸಿ
ಕೆಡವಿದ
ಪಾಂಡುಪುತ್ರರ
ಸೀಳ ಬಂದವನಿಗೆ
ಭ್ರಮೆಯಾಯಿತೆಂತು
ಉಳಿದರದೆಂತು ಈ ಪಂಚರು?

ಅವರ ಚಿಣ್ಣರ ವಧೆ
ಛೇ...ಹಿತವಿಲ್ಲ
ಇದೋ ನಾರಾಯಣಾಸ್ತ್ರದ
ವಂಶವಿನಾಶಿ ಮಂತ್ರದಂಡ!

ಓ....ಗೊಲ್ಲನಲ್ಲೆ
ಇರುವನಲ್ಲ....ಬಳಿಯಲ್ಲೆ
ಉತ್ತರೆಯ ಗರ್ಭವಷ್ಟೇ ಅದಕೆ
ಸಿಕ್ಕ ಬಲಿ!

ಶಾಪ ಹೊತ್ತು ಈಗ ನನಗೆ
ಬೇಕಿದೆಯೇನು
ಈ ಚಿರಂಜೀವಿ ಪಟ್ಟ?

ಕಲಿಯಾಗಿದ್ದೆ ನಿಜ
ಆದರೆ
ಕಲಿಯಲೇ ಇಲ್ಲ!

No comments:

Post a Comment