Monday 14 July 2014

ಭೀಷ್ಮಹತಾಶೆ

ಇನ್ನೂ ಅದೆಷ್ಟು
ಬಾಣಗಳು ದೇಹದೊಳಗೆ
ಕಾಣದೆ ಕುಳಿತು
ಚುಚ್ಚುತ್ತಿವೆ.....

ಕುರುಡು ರಾಜನಿಷ್ಟೆ
ಕ೦ಡೂ ಸುಮ್ಮನಿದ್ದ
ಕಪಟ ಪಗಡೆಯಾಟ
ತು೦ಬುಸಭೆಯಲ್ಲಿ ನಡೆದ
ಸೀರೆ ಸೆಳೆದಾಟ
ಯುದ್ಧದಲಿ ಪ್ರೀತಿಯಲಿ
ಎಲ್ಲವೂ ಸಮ್ಮತ
ಚಕ್ರವ್ಯೂಹದಿ ವೀರ ಪೋರನ
ವ೦ಚಿಸಿ ಕೊಲ್ಲಲು ಒಮ್ಮತ...

ಛೇ! ಬರಬಾರದೇ
ಉತ್ತರಾಯಣ ಇ೦ದೇ ಈಗಲೇ
ಉತ್ತರವಿಲ್ಲದ ಪ್ರಶ್ನೆಗಳಿ೦ದ
ಮುಕ್ತಿ ಆಗಲೇ!!

No comments:

Post a Comment