Wednesday 15 July 2015

ಗಾಂಧಾರಿ!

ಛೇ!ತಪ್ಪು ಮಾಡಿದೆ ಎನಿಸುತ್ತಿದೆ
ಅವ ಕುರುಡನಾದರೆ
ನಾ ಅವನ ಕಣ್ಣಾಗಿರಬೇಕಿತ್ತು
ನಾನೇಕೆ ಕೆಟ್ಟ ಅಹಮ್ಮಿನಲ್ಲಿ
ಕಣ್ಣಿಗೆ ಬಟ್ಟೆ ಕಟ್ಟಿಕೊಳ್ಳಬೇಕಿತ್ತು?
ಕಣ್ಣಿದ್ದ ಅಮ್ಮನ ಮು೦ದೆ
ಮಗ ಬೇರೆ ರೀತಿಯೇ
ವ್ಯವಹರಿಸುತ್ತಿದ್ದನೋ ಏನೋ
ಅಪ್ಪನ ಹೊಟ್ಟೆಯುರಿಗೆ ಅವನೇ
ಮದ್ದಾಗಿರಬಹುದಿತ್ತು!
ಪಾ೦ಡುಪುತ್ರರ
ಜೊತೆಜೊತೆಯಲ್ಲಿ ಅರ್ಧರಾಜ್ಯವಾದರೂ
ನೆಮ್ಮದಿಯಿಂದ ಆಳಿ ರಾಮರಾಜ್ಯವ
ಮರೆಸುವಂತೆ ಕುರುರಾಜ್ಯ ಸ್ಥಾಪಿಸಿ...
ಓಹ್! ಈ ಯುದ್ಧಭೂಮಿಯ
ಅಗತ್ಯವೆಲ್ಲಿತ್ತು ಆಗ?
ಆ ಚಿತ್ರ - ಅದೇ....
ಧರ್ಮಜ-ಸುಯೋಧನರ ಜೋಡಿ
ಬೆನ್ನಿಗೆ ನಿ೦ತ ಭೀಷ್ಮ ದ್ರೋಣರು
ಮಕ್ಕಳು ಮೊಮ್ಮಕ್ಕಳು ಮನೆತುಂಬ
ಆ ಚಿತ್ರ
ಕಣ್ಣಿಗೆ ಕಟ್ಟುತ್ತಲೇ
ಇದೋ ಈ ಕಟ್ಟು ಬಿಚ್ಚಿದರೂ ನನಗೆ
ಏನೂ ಕಾಣುತ್ತಿಲ್ಲ.....
ನಿಜವಾಗಿ ನನ್ನ
ಆ ಮೊದಲಿನ ನಿರ್ಧಾರವೇ
ನನ್ನ ಕುರುಡು ಮಾಡಿತ್ತು
ಬೇಕಿರಲಿಲ್ಲ ಈ ಪಟ್ಟಿ!

No comments:

Post a Comment