Tuesday 14 September 2021

ಹೊನ್ನ ಜಿಂಕೆ

 ಯಾಕೆ ಕಾಡಲಿಲ್ಲ ರಾಮನನು

ಇನಿತೂ ಶಂಕೆ...
ಇರಬಹುದು ರಕ್ಕಸರ ಮಾಯೆ
ಆ ಹೊನ್ನ ಜಿಂಕೆ?
ಯಾರದೇ ದುಷ್ಕೃತ್ಯಗಳಿಗೆ
ಇರಬೇಕು ಅಂಕೆ
ದುರಾಡಳಿತದಿಂದ ದೂರ
ಆಗಬೇಕು ಲಂಕೆ.
ಆಗಬೇಕಿತ್ತು ಕುಂಭಕರ್ಣ
ರಾವಣರ ಸಂಹಾರ
ಅದಕೇ ಆದುದು ಈ ಅವತಾರ
ತಿಳಿಯೊ ಮಂಕೇ!

No comments:

Post a Comment