Sunday 14 April 2019

ಕೊ ಳ ಲು

ನಾ ಮೇಲು 
ಅಲ್ಲ ನಾ ಮೇಲು
ನನ್ನದೇ ಹೆಚ್ಚುಗಾರಿಕೆ
ನಿನ್ನದೇನು ಮಹಾ


ಹರಿಯ ಶಿರವೇರಿರುವೆ
ಹೆಮ್ಮೆಯಿಂದ ಬೀಗಿತು
ಅಂದದ ನವಿಲುಗರಿ

ಮಾಧವನ ಎದೆಯಲಿರುವೆ
ಗರ್ವದಿಂದ ತೂಗಿತು
ಹಸಿರು ತುಳಸೀಮಾಲೆ

ಮುಗಿಯದ ಪೈಪೋಟಿ
ಯಾರ ಗೆಲುವು 
ಯಾರಿಗೆ ಸೋಲು?

ಹೆಮ್ಮೆ ಗರ್ವಗಳು
ಕೊಚ್ಚಿ ಹೋದವು ಆಲಿಸಿ
ಮುರಳೀಲೋಲನ ಅಳಲು

ಸಾಕಾಗಿತ್ತು ಕೃಷ್ಣನಿಗೆ
ಜಂಭದ ಒಣ ಮಾತುಗಳು
ಬೇಕಿತ್ತು ಏಕಾಂತ ಜೊತೆಗೆ
ಮುದ ನೀಡುವ 
ಆ ತ ನ್ನ ಕೊ ಳ ಲು!

No comments:

Post a Comment