Friday 5 April 2019

IPL2019RCB

#IPL

ಪ್ರತಿ ಮ್ಯಾಚಿಗೆ ಮೊದಲು ವಿರಾಟ್ ಎದುರಾಳಿ ತಂಡದ ನಾಯಕನಿಗೆ ಫೋನಾಯಿಸಿದಾಗ:

ವಿ: ಮಹಿ ನಾನು ವಿರಾಟ್. ನಾಳೆ ಪಂದ್ಯ ನಾವು ಗೆಲ್ಲಬೇಕಲ್ಲ.
ಧೋ: ತಾಕತ್ತಿದ್ದರೆ ಗೆಲ್ಲು ನೋಡೋಣ.
ವಿ: ರೋಹಿತ್. ನಾನು ವಿರಾಟ್. ನಾಳೆ ನೀವು ಸೋಲಬೇಕು.
ರೋ: ಭಾರತದ ನಾಯಕತ್ವಕ್ಕೇ ನಾನು ಉತ್ಸುಕನಾಗಿದ್ದೇನೆ. ಇಲ್ಲಿ ಸೋಲೋದಾ? ನೋ ವೇ.
ವಿ: ಭುವಿ. ನಾನು ವಿರಾಟ್. ವಿಶ್ವ ಕಪ್ ಆಡ್ಬೇಕು ಅಂತಿದೀಯ ತಾನೇ?
ಭು: ನಮ್ ಭಾರತದ ಆಟಗಾರರನ್ನು ಒಪ್ಪಿಸಬಹುದು. ಆದರೆ ಆ ವಿದೇಶಿ ಆರಂಭ ಆಟಗಾರರು ಏನ್ ಮಾಡ್ತಾರೋ ನೋಡ್ಬೇಕು.
ವಿ: ಜಿಂಕ್ಸ್. ನಾನು ವಿರಾಟ್. ಮತ್ತೆ ಭಾರತ ತಂಡಕ್ಕೆ ಬರುವ ಆಸೆ ಇದೆ ತಾನೇ? ನಾಳೆ ಸೋಲ್ಬೇಕು ನಿನ್ ತಂಡ.
ರ: ಅಯ್ಯೋ ಸುಮ್ನಿರಪ್ಪ. ಈ ತಂಡಕ್ಕೇ ನಾಯಕ ಅನ್ನೋದಿಕ್ಕೆ ಇದೀನಿ. ನಮ್ಮದೂ ಗೆಲುವು ಆಗಿಲ್ಲ. ತೊಡೆ ತಟ್ಟೋದೇಯಾ.
ವಿ: ದಿನೇಶ್ ನಾನು ವಿರಾಟ್. ಎಮ್ಮೆಸ್ ಇದ್ರೂ ನಿನಗೆ ಅವಕಾಶ ಸಿಕ್ಕಿದ್ದಕ್ಕೆ ಯರು ಕಾರಣ ಗೊತ್ತಾ? ನಾಳೆ ಮ್ಯಾಚ್?
ದಿ: ಎಲ್ಲರನ್ನೂ ಸುಮ್ಮನಾಗಿಸಬಹುದು ಚೀಕೂ ಭಾಯ್ ..... ಆದರೆ ಆ ರಸೆಲ್ ಏನಾದ್ರೂ ಮಾಡಿದ್ರೆ ನಂಗೊತ್ತಿಲ್ಲ.
ವಿ: ಶ್ರೇಯಸ್ ನಾನು ವಿರಾಟ್.
ಶ್ರೇ: ಹೇಳಿ ಕ್ಯಾಪ್ಟನ್.
ವಿ: ನಾಳೆ ನಮ್ಮ RCB ಗೆಲ್ಬೇಕು. ಅರ್ಥ ಆಯ್ತಾ?
ಶ್ರೇ: ನಮಗೆ ಅಭ್ಯಾಸ ಇದೆ ಬಿಡಿ. ಸಹಜವಾಗಿ ಆಡಿ ಸೋಲ್ತೀವಿ. ನಮ್ಮ ಒಂದಿಬ್ಬರು ಯುವ ಆಟಗಾರರಾದರೂ ಆಯ್ಕೆ ಅಗ್ತಾರೆ ತಾನೇ?
ವಿ: ರವಿ ನನು ವಿರಾಟ್.
ರ: ಆಹಾ ಈಗ ನೆನಪಾಯ್ತಾ? ನಾ ಟೆಸ್ಟ್ ಮ್ಯಾಚ್ ಮಾತ್ರ ಆಡೋಹಾಗೆ ಮಾಡಿರೋ ನಿನ್ನನ್ನು ಸುಮ್ನೆ ಬಿಡೋಲ್ಲ. ಅಲ್ಲದೆ ಈ ರನ್ ಔಟ್ ಬೇರೆ ನನ್ ಪ್ರಾಣ ತಿಂತಿದೆ. wait and see.
ವಿರಾಟ್ (ಸ್ವಗತ) ನನ್ ಮಕ್ಕಳು ನಮ್ ಟೀಮ್ ಬಿಟ್ಟು ಹೋದವ್ರೆಲ್ಲ ಚೆನ್ನಾಗೇ ಆಡ್ತಿದ್ದಾರಲ್ಲ. ಇದೇನ್ ಅನಿಲ್(ಕುಂಬ್ಳೆ) ಶಾಪಾನಾ ಗುರೂ?
                                           _____ ತಲಕಾಡು ಶ್ರೀನಿಧಿ.

No comments:

Post a Comment