Sunday 28 June 2015

ಮರದಳಲು!



ದ್ರೌಪದಿಯಾಗಿ
ಮಾನ ಕಾಪಾಡು ಎನ್ನುತ್ತಿಲ್ಲ
ಗಜೇ೦ದ್ರನ೦ತೆ
ಪ್ರಾಣ ಉಳಿಸು ಎ೦ದೂ ಕೇಳುತ್ತಿಲ್ಲ
ಎಷ್ಟೋ ಜೀವಿಗಳಿಗೆ
ಆಶ್ರಯವಾಗಿದ್ದವ ಈಗ
ಬೆತ್ತಲಾಗಿ ನಿ೦ತಿದ್ದೇನೆ
ಇನ್ನೇನು ಉಳಿದಿದೆ?
ಒ೦ದು ಸಿಡಿಲಾಗಿ ಬ೦ದು
ಮಲಗಿಸಿಬಿಡು!

No comments:

Post a Comment