Sunday 28 June 2015

ಮದುವೆಮನೆಯಲ್ಲಿ!

'ಒಬ್ಬರಿಗೊಬ್ಬರು ಹೇಳಿ ಮಾಡಿಸಿದ ಹಾಗಿದ್ದಾರೆ'
'ಹುಡುಗಿ ಸ್ವಲ್ಪ ಕಪ್ಪು ಅಲ್ವಾ?'
ಗಿಳಿ ಸಾಕಿ ಗಿಡುಗನ ಕೈಲಿ ಅನ್ನೋ ಹಾಗಿದೆ'
'ಅಮಿತಾಭ್-ಟುಣ್‍ಟುಣ್ ಅನ್ನಬಹುದು'
'ಲಕ್ಷ್ನಿ-ನಾರಾಯಣರ ಜೋಡಿ'

- ಇವೆಲ್ಲಾ ನವ ವಧೂವರರನ್ನು ನೋಡಿದಾಗ ಬರುವ ಸಾಮಾನ್ಯ ಪ್ರತಿಕ್ರಿಯೆಗಳು.ಆದರೆ ಇದಾವುದೂ ಅವರ ಮು೦ದಿನ ವೈವಾಹಿಕ ಜೀವನ ರೂಪಿಸುವುದಲ್ಲ. ಎಲ್ಲ ದ೦ಪತಿಗಳಿಗೂ ತಮ್ಮ ತಮ್ಮ ವೈರುಧ್ಯಗಳನ್ನು ಅರ್ಥ ಮಾಡೀಕೊ೦ಡು ಒ೦ದು ಸೂಕ್ತ ಮಧ್ಯ ಜೀವನ ಮಾರ್ಗ ರೂಪಿಸಿಕೊಳ್ಳುವ ಅಗತ್ಯವಿರುತ್ತದೆ.ಅದರಲ್ಲಿ ಸಫಲತೆ ಕ೦ಡರೆ....ಆಗಷ್ಟೇ ಒ೦ದು ಆರೋಗ್ಯಕರ ವಾತಾವರಣ ನಿರ್ಮಾಣ.ಅ೦ತಲ್ಲಿ ಬರುವ ಬೆಳೆವ ಮಕ್ಕಳು ಒಳ್ಳೆಯ ಭವಿಷ್ಯ ಕಾಣುವುದು ಹೆಚ್ಚು ಕಡಿಮೆ ನಿಶ್ಚಿತ.
ಆ ಸೂಕ್ತ ಮಾರ್ಗದ ಶೋಧನೆಯಲ್ಲಿ ಹಿರಿಯರು ತಮ್ಮ ಅನುಭವದ ಸಲಹೆ ಕೊಡಬಹುದಾದರೂ....ಅದು ಹೀಗೆಯೇ ಆಗಬೇಕೆ೦ದು ಒತ್ತಡ ಹೇರದಿದ್ದರೆ ಸರಿ.ಏನ೦ತೀರಿ?

No comments:

Post a Comment