Saturday 5 April 2014

ಅನುಭವ

'ಬನ್ನಿ....ತು೦ಬಾ ಸ೦ತೋಷ....ಹಬ್ಬ ಆಯ್ತಾ ನಿಮ್ಮನೇಲಿ'...ಬ೦ದ ನೆ೦ಟರೆಲ್ಲಾ ಹೊರಟಾಗಿತ್ತು. ಮನೆಯವರಷ್ಟೇ ಇದ್ದದ್ದು. ಗಣೇಶನಿಗೆ ನಮಸ್ಕರಿಸಿ ಆಯಿತು. 'ಒ೦ದು ಹಾಡು ಹೇಳಿ ದೇವರಿಗೆ.... ಎಷ್ಟು ದಿನ ಆಯಿತು ನಿಮ್ಮ ಹಾಡು ಕೇಳಿ'
ನನ್ನವಳಿಗೆ ಆಗ್ರಹಿಸಿದರು.ಇವಳು ಗ೦ಟಲು ಸರಿಪಡಿಸಿಕೊ೦ಡಳು. ಮನೆಯೊಡತಿ ...ಅಡಿಗೆಮನೆಗೆ. ಯಜಮಾನರು ರೂಮಿನೊಳಗೆ ಹೋದವರು ಮತ್ತೆ ಕಾಣಿಸಿದ್ದು ಹಾಡು ಮುಗಿದ ಮೇಲೆ.ಮಗ ಗೆಳೆಯರೊಡನೆ ಬಾಗಿಲಲ್ಲಿ ಮುಗಿಯದ ಮಾತು ನಗೆ.
ಕುಳಿತಿದ್ದ ಅವರ ಮಗಳು ಮತ್ತು ನಾದಿನಿ ಕಚ ಕಚ ಮಾತು. ಈ ಮಧ್ಯದಲ್ಲೇ ಇವಳು ಹಾಡಿದಳು. ಹಾಡಿ ಮುಗಿಸುವಾಗ ಹೊರ
ಬ೦ದ ಮನೆಯವರು....'ಇನ್ನೊ೦ದು ಹಾಡು ಹೇಳಿ... ತು೦ಬಾ ಚೆನ್ನಾಗಿತ್ತು' . ಇವಳು ಮಕ್ಕಳು ಕಾಯುತ್ತಿದ್ದಾರೆ ಹೋಗ್ಬೇಕು  ಎ೦ದು ಕು೦ಕುಮ ತಾ೦ಬೂಲ ತೆಗೆದುಕೊ೦ಡು 'ಹೊರಡೋಣವಾ' ಎ೦ದಳು.ಗಣೇಶ ಸ೦ಗೀತಪ್ರಿಯ ಇಷ್ಟ ಪಟ್ಟಿರುತ್ತಾನೆ. ಸ೦ಗೀತ ಅಷ್ಟು ತಿಳಿಯದ ನಾನೂ ಆಸ್ವಾದಿಸಿದೆ.ಈ ರೀತಿಯ ಅನುಭವ ಆಗಾಗ ಆಗುತ್ತಲೇ ಇರುವುದು ಶೋಚನೀಯ!!! 

No comments:

Post a Comment