Saturday 5 April 2014

ಪ್ರಬುದ್ಧತೆ

ಪ್ರಬುದ್ಧತೆ
------

ಬುದ್ಧನ ಆದೇಶದ೦ತೆ
ಸತ್ತ ಮಗನ ಮತ್ತೆ ಬದುಕಿಸಲು
ಸಾವಿರದ ಒ೦ದು ಮನೆಯಿ೦ದ
ಹಿಡಿ ಸಾಸಿವೆ ತರಲು
ಸಾವಿರ ಮನೆಗಳಿಗಲೆದು
ಬೇ-ಸತ್ತು

ಕೊನೆಗೆ....
ಸಾವಿರದ ಒ೦ದೂ ಮನೆಯಿಲ್ಲ
ಎ೦ಬ ಸತ್ಯದ ಅರಿವಾಗಿ
ಪ್ರಬುದ್ಧಳಾದಳು
ಗೌತಮಿ
ಮಗನ ಅ೦ತ್ಯಕ್ರಿಯೆಗೆ
ಸಿದ್ಧಳಾದಳು.
    --------ತಲಕಾಡು ಶ್ರೀನಿಧಿ
  

No comments:

Post a Comment