Wednesday 9 April 2014

ಕಾರ್ಗಿಲ್ ಕದನ

ಕಾರ್ಗಿಲ್ ಕದನ
-----------

ಇತ್ತೀಚೆಗಷ್ಟೇ ಗಡಿಪ್ರದೇಶ ಕಾರ್ಗಿಲ್ಲ-
ಲ್ಲಿ ನಡೆದ ಯುದ್ಧದ ಅರಿವುಯಾರಿಗಿಲ್ಲ?
ನ್ಯಾಯನೀತಿ ನಮ್ಮದಿತ್ತು- ಅದಕೇ ಅಲ್ಲಾ
ಅವರ ನೆರವಿನ ಕರೆಗೆ ಓಗೊಡಲಿಲ್ಲ!!

ಅಕ್ರಮನಿರಲಿ,ಆಕ್ರಮಣಕಾರನಿರಲಿ
ಅಹ೦ಕಾರದ ನುಡಿನಡೆಗೆ ಧಿಕ್ಕಾರವಿರಲಿ
ತಿಳಿದಿಲ್ಲವೇ ಖಾಲಿಗಡಿಗೆ ಎ೦ದೂ ಶಬ್ದ ಜಾಸ್ತಿ
ಒ೦ದಿ೦ಚಾದರೂ ನೆಲ ಬಿಟ್ಟೇವಾ?..ಇದು ನಮ್ಮ ಆಸ್ತಿ!!

ಎತ್ತರೆತ್ತರದ ಸ್ಥಳದಿ ಅಡಗಿ ಕುಳಿತ ದುಷ್ಟರ
ಗುರಿ ತಪ್ಪಿಸಿ ಮುನ್ನಡೆವುದು ಅದೆಷ್ಟು ದುಸ್ತರ
ಅ೦ಜದೇ ಅಳುಕದೇ ನುಗ್ಗಿ ನಡೆದರು ಮು೦ದೆ
ಇವರೆದುರು ವೈರಿಪಡೆ ಬರಿಯ ಕುರಿಮ೦ದೆ!!

ದೇಶಸೇವೆಯಲಿ ತೆತ್ತರು ಬಹಳ ಜನ ಪ್ರಾಣ
ಪಾಪ..ಎಷ್ಟೋ ಮ೦ದಿಗಾಯಿತು ಕೈಕಾಲು ಊನ
ಯುದ್ಧ ನಮ್ಮಲ್ಲಿ ದೇಶಪ್ರೇಮ ಬಡಿದೆಬ್ಬಿಸುವಲ್ಲಿ ಸಫಲ
ಆದರೂ ಏಕೋ ಎಲ್ಲರನು ಒ೦ದುಗೂಡಿಸುವಲ್ಲಿ ವಿಫಲ!!

ಕರ ಮುಗಿದು ನಿನಲ್ಲಿ ಬೇಡುವುದಿಷ್ಟೇ ದೇವಾ!
ನಿವಾರಿಸು ಈ ತ್ಯಾಗಿಗಳ ಮನೆಯವರ ನೋವಾ
ಮತೆ ಆರ೦ಭವಾಗದಿರಲಿ ಈ ಬೇಡದ ಕದನ
ವೀರಯೋಧ - ಇದೋ ನಿನಗೆ ನಮ್ಮೆಲ್ಲರ ನಮನ!!
                                        - ತಲಕಾಡು ಶ್ರೀನಿಧಿ
                           (ಕಾರ್ಗಿಲ್ ವಿಜಯದ ಸ೦ಧರ್ಭದಲ್ಲಿ ಕನ್ನಡ ಸ೦ಘದಿ೦ದ ಬಹುಮಾನಿತ)

No comments:

Post a Comment